ಜಂಗಮ ಕಲೆಕ್ಟಿವ್, ಬೆಂಗಳೂರು ಅಭಿನಯಿಸಿದ, ಕೆ.ಪಿ.ಲಕ್ಷ್ಮಣ್ ಪರಿಕಲ್ಪನೆ ಮತ್ತು ವಿನ್ಯಾಸ ಮಾಡಿರುವ, ಚಂದ್ರಶೇಖರ್ ಕೆ ನಿರ್ದೇಶನದ ನಾಟಕ ಪಂಚಮ ಪದ ಇಂದು ದಿನಾಂಕ 04-03-2024 ಸೋಮವಾರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್. ಐ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು. ಆಯನ ನಾಟಕದ ಮನೆ ಮತ್ತು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಈ ಪ್ರದರ್ಶನದ ಆಯೋಜನೆ ಮಾಡಿದ್ದರು. ಹೋರಾಟದ ಹಾಡುಗಳ ಹುಟ್ಟು ಮತ್ತು ಸಂದರ್ಭಗಳನ್ನು ನೆನಪು ಮಾಡಿಕೊಳ್ಳುತ್ತಾ, ಕೋಟಿಗಾನಹಳ್ಳಿ ರಾಮಯ್ಯ, ಕವಿ ಸಿದ್ಧಲಿಂಗಯ್ಯ ಮೊದಲಾದವರ ಬದುಕಿನ ಜೊತೆಜೊತೆಗೆ ಈ ಹಾಡುಗಳು ಹೇಗೆ ಹುಟ್ಟಿದವು, ಎಂಬುದನ್ನು ಕಟ್ಟಿಕೊಡುತ್ತಲೇ ಸಾಗಿತು. ಬಾಲ್ಯದಲ್ಲಿ ಅಪ್ಪ ಆಗಾಗ ಗುನುಗುತ್ತಿದ್ದ ʼನೆನ್ನೆದಿನಾ ನನ್ನಜನಾ ಬೆಟ್ಟದಂತೆ ಬಂದರುʼ ಹಾಡು ಹುಟ್ಟಿದ ಸಂದರ್ಭ ಮತ್ತು ಅದರ ಹಿಂದಿರುವ ನೋವು ಮತ್ತು ಆಕ್ರೋಷಗಳ ಹಿನ್ನೆಲೆ ತಿಳಿದು ಒಮ್ಮೆ ಮನಸ್ಸು ಅಲುಗಾಡಿಹೋಯಿತು.
No comments:
Post a Comment